Showing posts with label ಬಹುಮಾನ ವಿಜೇತ ಚಿತ್ರಗಳು.. Show all posts
Showing posts with label ಬಹುಮಾನ ವಿಜೇತ ಚಿತ್ರಗಳು.. Show all posts

Monday, July 12, 2010

ಸರ, ಇವು EXtra ಇದೆಯಾ"

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ  ಫೋಟೊ ಟುಡೆ ಎನ್ನುವ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಸ್ಪರ್ಧೆಯಲ್ಲಿ ಬಹುಮಾನ ಗೆದ್ದ ಚಿತ್ರಗಳು.

The Statelevel photography Exhibition organised in palace ground Bangalore Date:9, 10,11th of july 2010.

ಬಣ್ಣದ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.
Pictorial Awards..
Avard winning photos
Pictorial 1st Award: Morning ing Jim corbett: Dr.S.Harinarayan. bangalore
ಮೊದಲ ಬಹುಮಾನ ಬೆಂಗಳೂರಿನ ಡಾ. ಎಸ್. ಹರಿನಾರಾಯಣ್.  ಚಿತ್ರ:  ಜಿಮ್ ಕಾರ್ಬೆಟ್ಟಿನಲ್ಲಿ  ಮುಂಜಾನೆ
2nd Award: "Monsoonwalk" by M.Ramu.Bangalore
ಎರಡನೇ ಬಹುಮಾನ ಬೆಂಗಳೂರಿನ ಎಂ.ರಾಮ್.  ಚಿತ್ರ: ಮಳೆಗಾಲದ ನಡಿಗೆ



3rd Award: "winning look" by Shivu.k ARPS.AFIAP.Bangalore.
ಮೂರನೇ ಬಹುಮಾನ ಬೆಂಗಳೂರಿನ ಶಿವು.ಕೆ.  ಚಿತ್ರ : ಗೆಲುವಿನ ನೋಟ.



ಪ್ರಕೃತಿ ವಿಭಾಗದಲ್ಲಿ ಬಹುಮಾನ ವಿಚೇತ ಚಿತ್ರಗಳು.
Nature section Awards.
1st Award: "Loin fighting for food" V.S.Kashinath.Bangalore

ಮೊದಲ ಬಹುಮಾನ ಬೆಂಗಳೂರಿನ ವಿ.ಎಸ್. ಕಾಶಿನಾಥ್. ಚಿತ್ರ: ಆಹಾರಕ್ಕಾಗಿ ಹೆಣ್ಣು ಸಿಂಹಗಳ ಕಾದಾಟ.



2nd Award: "Bad luck for longoor" Ravi maganthi.Bangaloreಎರಡನೆ ಬಹುಮಾನ ಬೆಂಗಳೂರಿನ ರವಿ ಮಗಂತಿ. ಚಿತ್ರ: ಹುಲಿಯ ಬಾಯಲ್ಲಿ ದುರಾದೃಷ್ಟ ಲಂಗೂರ್


3rd Award: "Slothbear with cubs" by Hemachandra jain.Davanagere.ಮೂರನೇ ಬಹುಮಾನ ದಾವಣಗೆರೆಯ ಹೇಮಚಂದ್ರ ಜೈನ್. ಚಿತ್ರ:  ಕರಡಿಯ ಜೊತೆ ಮರಿಗಳು.

Digital Creative section
ಡಿಜಿಟಲ್ ಕ್ರಿಯೇಟಿವ್ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.

1st Award: " Three colours" by G.S.Ravishankar. Mysoreಮೊದಲ ಬಹುಮಾನ ಮೈಸೂರಿನ ಜಿ.ಎಸ್.ರವಿಶಂಕರ್. ಚಿತ್ರ: ಮೂರು ಬಣ್ಣಗಳು.


2nd Award: "Towards moon" by Shivu.k ARPS. AFIAP. Bangalore
ಎರಡನೇ ಬಹುಮಾನ ಬೆಂಗಳೂರಿನ ಶಿವು.ಕೆ. ಚಿತ್ರ: ಚಂದ್ರನೆಡೆಗೆ


3rd Award: "Creative falls" by G.S.Ravishankar.Mysoreಮೂರನೇ ಬಹುಮಾನ ಮೈಸೂರಿನ ಜಿ.ಎಸ್.ರವಿಶಂಕರ್. ಚಿತ್ರ: ಸೃಜನ ಶೀಲ ಜಲಪಾತ.



Wedding photography sectionಮದುವೆ ಫೋಟೋಗ್ರಫಿಯ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು

1st  Award: "Wedding celebration"  by Raghavendra, Udupi.ಮೊದಲ ಬಹುಮಾನ ಉಡುಪಿಯ ರಾಘವೇಂದ್ರ .ಚಿತ್ರ : ಮದುವೆಯ ಸಂಬ್ರಮ

2nd Award: "Dont worry" by Shivu.k.ARPS.AFIAP. Bangaloreಎರಡನೇ ಬಹುಮಾನ ಬೆಂಗಳೂರಿನ ಶಿವು.ಕೆ. ಚಿತ್ರ:  ನಾನಿದ್ದೇನೆ, ಚೆನ್ನಾಗಿ ನೋಡಿಕೊಳ್ಳುತ್ತೇನೆ



3rd Award:" Changing the garland"  by Devaraj. Bangaloreಮೂರನೆ ಬಹುಮಾನ ಬೆಂಗಳೂರಿನ ದೇವರಾಜ್. ಚಿತ್ರ:  ಹಾರ ಬದಲಾವಣೆಯ ಮಜ


ಶಿಡ್ಲಘಟ್ಟದ ಮಲ್ಲಿಕಾರ್ಜುನ್, ಉದಯ್ ಹೆಗಡೆ, ಸಿರಸಿಯ ವಿ ಡಿ ಭಟ್, ಚಿಕ್ಕಮಗಳೂರಿನ ಮೂರ್ತಿ ಮತ್ತು ನಾನು ಅಲ್ಲಿ ಪ್ರದರ್ಶನಕ್ಕಿದ್ದ ಚಿತ್ರಗಳನ್ನು ನೋಡುತ್ತಾ ಅವುಗಳ ಬಗ್ಗೆ ಚರ್ಚಿಸುತ್ತಿದ್ದೆವು. ಆತ ಉತ್ತರ ಕರ್ನಾಟಕದವನಿರಬೇಕು, ನನ್ನ ಕೈಯಲ್ಲಿದ್ದ ಮೂರು ಬಹುಮಾನದ ಮೊಮೆಂಟೋಗಳನ್ನು ನೋಡಿ,


"ಇವು ಎಲ್ಲಿ ಸಿಗುತ್ತವೆ ಸರ" ಕೇಳಿದ.


ಅವನ ಮಾತನ್ನು ಕೇಳಿ ನಾವೆಲ್ಲಾ ಮುಖ ಮುಖ ನೋಡಿಕೊಂಡೆವು. ಎಲ್ಲರಿಗೂ ಜೋರಾಗಿ ನಗು ಬಂದರೂ ನಗದಂತೆ ತಡೆದುಕೊಂಡರು.


"ನೋಡಿ ಇದೇ ಸಾಲಿನ ಕೊನೆಯಲ್ಲಿ ಬಲೂನುಗಳನ್ನು ಹಾಕಿ ಡೆಕರೇಷನ್ ಮಾಡಿದ್ದಾರಲ್ಲ, ಆ ಸ್ಟಾಲ್‍ನಲ್ಲಿ ಕೇಳಿ. ಸಿಗಬಹುದು" ಅಂದೆ.


"ಹೌದಾ" ಅಂದವನು ಮತ್ತೆ ಆ ಮೊಮೆಂಟೊಗಳ ಮೇಲೆ ಹೆಸರಿದ್ದದ್ದು ನೋಡಿ, " ಇದರ ಹೆಸರು ಬರೆಸಬಹುದಾ?" ಮತ್ತೆ ಕೇಳಿದ.


"ಹೌದ್ರಿ, ನಿಮಗೆ ಬೇಕಾದ ಹೆಸರನ್ನು ಅವರೇ ಬರೆದುಕೊಡುತ್ತಾರೆ," ಅಂದೆ.
ಮತ್ತೆ ಅಲ್ಲಿದ್ದ ಚಿತ್ರಗಳನ್ನು ನೋಡುತ್ತಾ ಬಹುಮಾನ ಗಳಿಸಿದ ಚಿತ್ರದ ಕೆಳಗೆ ಹೆಸರಿತ್ತಲ್ಲ ಅದು ಅವನ ಕಣ್ಣಿಗೆ ಕಾಣಿಸಿತು. ಅದೇ ಹೆಸರು ಆ ಮೊಮೆಂಟೋನಲ್ಲಿ ಇದ್ದಿದ್ದು ನೋಡಿ " ಹೋ ಈ ಚಿತ್ರಕ್ಕೆ ನಿಮಗೆ ಬಹುಮಾನ ಬಂದಿದೆಯಾ" ಅಂತ ದೇಸಾವರಿ ನಗೆ ನಗುತ್ತಾ ಅಲ್ಲಿಂದ ಹೊರಟ. ಅವನ ಹೊರಟ ಮೇಲೆ ನಾವಂತೂ ನಕ್ಕಿದ್ದೇ ನಕ್ಕಿದ್ದು. ನಾವು ಹಾಗೆ ನೋಡುತ್ತಾ ಮುಂದೆ ಸಾಗಿದೆವು. ಮತ್ತೊಬ್ಬ ಅವನು ಕೂಡ ಉತ್ತರ ಕರ್ನಾಟಕದವನಿರಬೇಕು, ಅವನಿಗೂ ನನ್ನ ಕೈಲಿದ್ದ ಮುಮೆಂಟೋಗಳ ಕಡೆ ಕಣ್ಣು ಬಿತ್ತು. ಹತ್ತಿರ ಬಂದವನು.

"ಸರ, ಇವು Extra ಇದೆಯಾ" ಕೇಳಿದ.
ಅವನು ಕೇಳಿದ ಪ್ರಶ್ನೆಗೆ ಮತ್ತೆ ನನಗೆ ನಗು ಬಂದರೂ ತಡೆದುಕೊಂಡು
"ನನ್ನ ಬಳಿ ಮೂರೇ ಇರೋದು, ನಿಮಗೆ ಬೇಕಾದರೆ ಅಲ್ಲಿರುವ ಕಾರ್ಯಕ್ರಮಕ್ಕೆ ಹೋಗಿ ಕೇಳಿ. ಅಲ್ಲಿ ನಮ್ಮ ರಾಜ್ಯದ ರಾಜ್ಯಪಾಲರಿರುತ್ತಾರೆ. ಅವರೆ ನಮಗೆ ಕೊಟ್ಟಿರುವುದು. ನಿಮಗೂ ಕೊಡಬಹುದು". ಅಂದೆ.

ನನ್ನ ಉತ್ತರವನ್ನು ಕೇಳಿ ಅವನಿಗೆ ಏನು ಅರ್ಥವಾಗಲಿಲ್ಲವೆನಿಸುತ್ತದೆ. ನನ್ನ ಮುಖವನ್ನೊಮ್ಮೆ ನೋಡಿ ಹಾಗೆ ಹೊರಟುಹೋದ. ಬಹುಶಃ ಇಂಥ ಪ್ರದರ್ಶನ ಮೇಳಗಳಲ್ಲಿ ಉಚಿತವಾಗಿ ಬ್ಯಾಗುಗಳು, ಬ್ರೋಷರುಗಳು, ಗಿಪ್ಟ್ ಐಟಮುಗಳು, ವಿಸಿಟಿಂಗ್ ಕಾರ್ಡುಗಳನ್ನು ಪ್ರತಿಯೊಂದು ಸ್ಟಾಲಿನವರು ಕೊಡುತ್ತಿರುತ್ತಾರೆ. ಈ ಮುಮೆಂಟೋಗಳನ್ನು ಕೂಡ ಹಾಗೆ ಕೊಟ್ಟಿರಬಹುದು ಅಂತ ಅಂದುಕೊಂಡು ಆತ ಕೇಳಿರಬಹುದು ಅಂತ ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು. ಇಂಥವೇ ಅನೇಕ ಅನುಭವಗಳಾಗಿದ್ದು ನಮಗೆಲ್ಲರಿಗೂ ಆಗಿದ್ದು ದಿನಾಂಕ ೯,೧೦,೧೧ ರಂದು ಅರಮನೆ ಮೈದಾನದಲ್ಲಿ ರಾಷ್ಟ್ರಮಟ್ಟದ "ಫೋಟೊ ಟುಡೆ" ಎನ್ನುವ ಪ್ರದರ್ಶನದಲ್ಲಿ.


Hundreds of photographers and Videographers clicking and coveraging for Inaguration of phototoday Exhibition by Governer.
ಸಾವಿರಕ್ಕೂ ಹೆಚ್ಚು ಛಾಯಾಗ್ರಾಹಕರು ಒಂದೇ ವೇದಿಕೆಯಲ್ಲಿ  ಒಟ್ತಾಗಿ ಫೋಟೊ ಕ್ಲಿಕ್ಕಿಸುತ್ತಿರುವುದು.

ರಾಷ್ಟ್ರಮಟ್ಟದ ಫೋಟೊಗ್ರಫಿ ಸಲಕರಣೆಗಳ ಮಾರಾಟ, ಪ್ರದರ್ಶನ ಮೇಳದಲ್ಲಿ, "ಹುಲಿಯನ್ನು ಉಳಿಸಿ" ಎನ್ನುವ ಆಂದೋಲನದ ಹೆಸರಿನಲ್ಲಿ ಅದನ್ನು ನಮ್ಮ ರಾಜ್ಯದ ಮಾನ್ಯ ರಾಜ್ಯಪಾಲರು ಉದ್ಘಾಟಿಸುವಾಗ ಒಂದೇ ಬಾರಿಗೆ ಸಾವಿರಕ್ಕೂ ಹೆಚ್ಚು ಛಾಯಾಗ್ರ್‍ಆಹಕರು ಆ ವೇದಿಕೆಯಲ್ಲಿ ಉದ್ಘಾಟನೆಯನ್ನು ಕ್ಲಿಕ್ಕಿಸಿದರು. ಅಷ್ಟು ಛಾಯಾಗ್ರಾಹಕರು ಒಂದೇ ವೇದಿಕೆಯಲ್ಲಿ ಒಟ್ಟಾಗಿ ಫೋಟೊ ಕ್ಲಿಕ್ಕಿಸಿದ್ದು ರಾಷ್ಟ್ರಮಟ್ಟದ ದಾಖಲೆ. "ಕರ್ನಾಟಕ ಫೋಟೊಗ್ರಫಿ ಆಶೋಷಿಯಷನ್‍ರವರು ಆಯೋಜಿಸಿದ್ದ ರಾಜ್ಯಮಟ್ಟದ ಛಾಯಾಚಿತ್ರ ಪ್ರದರ್ಶನ, ಬಹುಮಾನ ವಿಜೇತ ಛಾಯಾಗ್ರಾಹಕರಿಗೆ ರಾಜ್ಯಪಾಲರಿಂದ ಬಹುಮಾನ ವಿತರಣೆ, ಇವೆಲ್ಲಾ ನಡೆದರೂ ಇದು ಯಾವ ಪತ್ರಿಕೆಯಲ್ಲೂ ದೊಡ್ಡ ಮಟ್ಟದ ಸುದ್ಧಿಯಾಗಲೇಇಲ್ಲ. ಏಕೆಂದರೆ ಅದು ಛಾಯಾಗ್ರಾಹಕರ, ಅವರ ಉಪಕರಣಗಳ, ಕ್ಯಾಮೆರಾಗಳ, ಲೆನ್ಸುಗಳ ಅವುಗಳನ್ನು ಕೊಳ್ಳುವ ಛಾಯಾಗ್ರಾಹಕರ, ಮತ್ತು ರಾಜ್ಯಮಟ್ಟದಲ್ಲಿ ಬಹುಮಾನ ವಿಜೇತ ಚಿತ್ರಗಳ ಪ್ರದರ್ಶನವಾಗಿತ್ತೇ ವಿನಃ ನಮ್ಮ ರಾಜಕೀಯ ಪಕ್ಷಗಳ ಸಮಾವೇಶವಾಗಿರಲ್ಲಿಲ್ಲವಾದ್ದರಿಂದ ಅವಕ್ಕೆ ಹೆಚ್ಚು ಪ್ರಚಾರವೂ ಸಿಗಲಿಲ್ಲ.
   ಯಡಿಯೂರಪ್ಪ ಯಾವಾಗ ಅಳುತ್ತಾರೆ, ಅಳುವಾಗ ಅದೆಷ್ಟು ಹನಿಗಳು ಬೀಳಬಹುದು, ಎಷ್ಟು ವೇಗವಾಗಿ ಬೀಳಬಹುದು, ಅದರ ತೂಕವೆಷ್ಟು.,   ಸೆಂಟಿಮೆಂಟ್ ಎಷ್ಟು, ಕೃತಕತೆ ಎಷ್ಟು  ಇಂಥ ವಿಚಾರಗಳ ಹಿಂದೆ ಬಿದ್ದಿರುವ ನಮ್ಮ ಪತ್ರಿಕೆಗಳಿಗೆ  ಇಷ್ಟು ದೊಡ್ಡಮಟ್ಟದ ರಾಷ್ಟ್ರಮಟ್ಟದ ಪ್ರದರ್ಶನದ ಬಗ್ಗೆ ಗಮನವಾದರೂ ಎಲ್ಲಿ ಬರಲು ಸಾಧ್ಯ ಹೇಳಿ?
ನಮ್ಮ ಕರ್ನಾಟಕದ ಎಲ್ಲಾ ದಿಕ್ಕುಗಳಿಂದಲೂ ವೃತ್ತಿನಿರತ ಮತ್ತು ಹವ್ಯಾಸಿ ಛಾಯಾಗ್ರಾಹಕರು ಮಾತ್ರವಲ್ಲದೇ ತಮಿಳುನಾಡು, ಆಂದ್ರಪ್ರದೇಶ, ಕೇರಳ, ಮುಂಬೈ, ಗೋವ, ಹೀಗೆ ಎಲ್ಲಾಕಡೆಗಳಿಂದಲೂ ಛಾಯಾಗ್ರ್‍ಆಹಕರು ಈ ಪ್ರದರ್ಶನಕ್ಕೆ ಬಂದಿದ್ದರು.


Sleeping photographer in function
 ಕೆಲವರಿಗೆ ಎಲ್ಲಿದ್ದರೂ ನಿದ್ರೆ ಬರುತ್ತದೆ!



Photography trainning classಮೇಳದಲ್ಲಿ ಫೋಟೊಗ್ರಫಿ ಕಲಿಕೆ ಕಾರ್ಯಕ್ರಮ


outside of exhibition
 ಪ್ರದರ್ಶನ ಮೇಳದ ಹೊರಗಿನ ದೃಶ್ಯ


ಪ್ರದರ್ಶನ ಮಳಿಗೆಗಳಲ್ಲಿ ನಿಕಾನ್, ಕ್ಯಾನನ್, ಫ್ಯೂಜಿ, ಸೋನಿ ಇತ್ಯಾದಿ ಕಂಪನಿಗಳು ಇಟ್ಟಿದ್ದ ಫೋಟೊಗ್ರಫಿ ಸಾಧನಗಳು, ಲೆನ್ಸುಗಳು, ಕ್ಯಾಮರೆಗಳಿಗಿಂತ ಆ ಕಂಪನಿಗಳ ಮಾರಾಟದ ಹುಡುಗಿಯರೇ ಚೆನ್ನಾಗಿದ್ದಿದ್ದು ನಮಗೆಲ್ಲಾ ಕುತೂಹಲದ ವಿಚಾರವಾಗಿತ್ತು.


ರಾಜ್ಯಪಾಲರಿಂದ ಬಹುಮಾನ ವಿತರಣೆ ಕಾರ್ಯಕ್ರಮವಾದ ನಂತರ ನನ್ನ ಫೋಟೊಗ್ರಫಿ ಗೆಳೆಯರಾದ ಕೊಪ್ಪಳದ ಪ್ರಕಾಶ್ ಕಂದಕೂರ, ಮುಂಡರಗಿಯ ಸಲೀಂ ಬಾಳಬಟ್ಟಿ, ಬಾಗಲಕೋಟದ ಇಂದ್ರಕುಮಾರ್, ಗುಲ್ಬರ್ಗದ ಅನಿಲ್ ಬೆಡ್ಗಿ, ಬಳ್ಳಾರಿಯ ನಾಗರಾಜ್, ಕುಷ್ಟಗಿಯ ಶಂಕರ್ ಪತ್ತರ್, ಸಿರಸಿಯ ಉದಯ್ ಹೆಗ್ಡೆ, ಸುಗಾವಿಯ ವಿ ಡಿ ಭಟ್, ಮುತ್ಮರ್ಡುವಿನ ನಾಗೇಂದ್ರ, ಚಿಕ್ಕಮಗಳೂರಿನ ಮೂರ್ತಿ, ಶಿಡ್ಲಘಟ್ಟದ ಮಲ್ಲಿಕಾರ್ಜುನ್ ಇವರೆಲ್ಲಾ ನಮ್ಮ ಮನೆಗೆ ಬಂದಿದ್ದು ನನಗಂತೂ ತುಂಬಾ ಖುಷಿಯಾಗಿತ್ತು.



ಎಡದಿಂದ ಬಲಕ್ಕೆ: ಮುಂಡರಗಿಯ ಸಲೀಂ ಬಾಳಬಟ್ಟಿ, ಬಾಗಲಕೋಟದ ಇಂದ್ರಕುಮಾರ್, ಮುತ್ಮರ್ಡುವಿನ ನಾಗೇಂದ್ರ, ಬಳ್ಳಾರಿಯ ನಾಗರಾಜ್, ಚಿಕ್ಕಮಗಳೂರಿನ ಮೂರ್ತಿ, ಸುಗಾವಿಯ ವಿ ಡಿ ಭಟ್,  ಶಿಡ್ಲಘಟ್ಟದ ಮಲ್ಲಿಕಾರ್ಜುನ್,  ಬೆಟ್ಟಕೊಪ್ಪದ ಉದಯ್ ಹೆಗಡೆ, ಗುಲ್ಬರ್ಗದ ಅನಿಲ್ ಬೆಡ್ಗಿ, ನಾನು ಮತ್ತು ನನ್ನ ಶ್ರೀಮತಿ, ಕೊಪ್ಪಳದ ಪ್ರಕಾಶ್ ಕಂದಕೂರ, ಕುಷ್ಟಗಿಯ ಶಂಕರ್ ಪತ್ತರ್.

Photography friends come to my house for Lunch. There are come from diffrent district for all over Karnataka state.
from Gadag:Saleem.B., Bagalkot:Indrakumar.,  Uttar kannad: Nagendra mutmurdu, V.D.Bhat., Bellary: Nagaraj., Chickmagalur: Murty., Kolar:D.G.Mallikarjun., Bettakoppa:uday hegde., Gulbarga:Anil bedge, Me and my wife., Koppala: Prakash kandakora., Kustagi: Shankar pattar.,


ಮದ್ಯಾಹ್ನ ಎರಡು ಗಂಟೆಯಿಂದ ಸಂಜೆ ಆರುಗಂಟೆಯವರೆಗೆ ನಮ್ಮ ಮನೆಯಲ್ಲಿ ಊಟ, ಹರಟೆ, ನಗು, ತಮ್ಮ ಊರಿನ ಅನುಭವವನ್ನು ಹಂಚಿಕೊಂಡಿದ್ದು, ಊಟ ಮಾಡುವಾಗ ಅದಕ್ಕೂ ಫೋಟೊಗ್ರಫಿ ಭಾಷೆಯನ್ನು ಬಳಸಿಕೊಂಡಿದ್ದು, ಮತ್ತು ಅವರವರ ಭಾಷಾ ಸೊಗಡಿನಲ್ಲಿ ಮಾತಾಡುತ್ತಿದ್ದುದ್ದು, ನಡು ನಡುವೆ ಚಿಕ್ಕಮಗಳೂರಿನ ಮೂರ್ತಿ ನಗೆ ಚಟಾಕಿಗಳನ್ನು ಹಾರಿಸುತ್ತಿದ್ದದ್ದು.. ಒಟ್ಟಾರೆ ಕರ್ನಾಟಕದ ಎಲ್ಲಾ ದಿಕ್ಕುಗಳ ಫೋಟೊಗ್ರಫಿ ಪ್ರತಿನಿಧಿಗಳು ನಮ್ಮನೆಯಲ್ಲಿ ಸಂತೋಷಕೂಟದ ನೆಪದಲ್ಲಿ ಸೇರಿದ್ದು ನನಗಂತೂ ಮರೆಯಲಾಗದ ಆನುಭವ. ಇವೆಲ್ಲವನ್ನು ಮುಂದೆ ಎಂದಾದರೂ ಬರೆಯುತ್ತೇನೆ.


ಚಿತ್ರಗಳು ಮತ್ತು ಲೇಖನ.
ಶಿವು.ಕೆ
Photos and Article by
Shivu.k ARPS.AFIAP.

Friday, January 29, 2010

ಮತ್ತಷ್ಟು ವೈವಿಧ್ಯಮಯ ಬಹುಮಾನಿತ ಚಿತ್ರಗಳು

೩೧ನೇ ರಾಷ್ಟ್ರಮಟ್ಟದ ಛಾಯಾಚಿತ್ರಗಳ ಪ್ರದರ್ಶನ ಮುಂದಿನ ತಿಂಗಳು ಫೆಬ್ರವರಿ ದಿನಾಂಕ 4ರ ಗುರುವಾರದಿಂದ 7ನೇಭಾನುವಾರದ ಸಂಜೆ ಎಂಟು ಗಂಟೆಯವರೆಗು ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುವುದರಿಂದ ಅದರ ಸಲುವಾಗಿ ಮತ್ತಷ್ಟು ವಿಭಾಗಗಳ ಬಹುಮಾನ ವಿಜೇತ ಚಿತ್ರಗಳನ್ನು ನೋಡೋಣ ಬನ್ನಿ.

ಪ್ರಕೃತಿ ಪ್ರಿಂಟ್ ವಿಭಾಗದಲ್ಲಿ ಬಹುಮಾನ ಪಡೆದ ಚಿತ್ರಗಳು.

ಮೊದಲ ಬಹುಮಾನ ಪಡೆದ ಚಿತ್ರ:"ಕ್ರೂಗರ್ ಹೊಳೆಯ ದಂಡೆಯಲ್ಲಿ ಚಿರತೆ"
ಛಾಯಾಗ್ರಾಹಕ ಎಸ್. ವಲ್ಲಾಳ್ ಮಲ್ಲಿಕಾರ್ಜುನ. ಬೆಂಗಳೂರು

ಎರಡನೇ ಬಹುಮಾನ ಪಡೆದ ಚಿತ್ರ:"ಬೇಟೆಯನ್ನು ಹೊತ್ತೆಯ್ಯುತ್ತಿರುವ ಚಿರತೆ"
ಛಾಯಾಗ್ರಾಹಕ ಎಸ್. ವಲ್ಲಾಳ್ ಮಲ್ಲಿಕಾರ್ಜುನ. ಬೆಂಗಳೂರು.


ಮೂರನೇ ಬಹುಮಾನ ಪಡೆದ ಚಿತ್ರ "ಬೇಟೆಯನ್ನು ಹೊತ್ತ ಸಿಂಹ"
ಛಾಯಾಗ್ರಾಹಕ: ಬಿ.ಕೆ.ಸಿನ್ಹ. ಪಾಟ್ನ.


ಅತ್ಯುತ್ತಮ ಹಕ್ಕಿ ಪ್ರಶಸ್ಥಿ ಪಡೆದ ಚಿತ್ರ: "ಪೈಡ್ ಕಿಂಗ್‍ಫಿಶರ್ ಹಾರಾಟದಲ್ಲಿ"
ಛಾಯಾಗ್ರಾಹಕ: "ಜಿ.ಎಸ್.ರವಿಶಂಕರ್. ಮೈಸೂರು.

ಅರ್ಹತಾ ಪತ್ರ ಪಡೆದ ಚಿತ್ರ: "ಸಾರಂಗ ಬೇಟೆ ಹಿಡಿದ ಹುಲಿ"
ಛಾಯಾಗ್ರಾಹಕ: "ಎಮ್.ವಿ.ಸಿದ್ಧಾರ್ಥ್ ಮಲ್ಲಿಕ್. ಬೆಂಗಳೂರು.


ಎರಡನೇ ಅರ್ಹತ ಪತ್ರ ಪಡೆದ ಚಿತ್ರ:"ರಿವರ್ ಟರ್ನ್ ಮರಿಯ ಜೊತೆ"
ಛಾಯಾಗ್ರಾಹಕ: "ಹೆಚ್.ಬಿ.ರಾಜೇಂದ್ರ" ಬೆಂಗಳೂರು.


ವರ್ಣ ಚಿತ್ರಗಳ ವಿಭಾಗದ ಬಹುಮಾನ ವಿಜೇತ ಚಿತ್ರಗಳು.

ಮೊದಲ ಬಹುಮಾನ ವಿಜೇತ ಚಿತ್ರ" ಮರಗಳ ಕಡೆಗೆ"
ಛಾಯಾಗ್ರಾಹಕ: ಸುಬ್ರತಾ ದಾಸ್. ಕೋಚ್ ಬಿಹಾರ


ದ್ವಿತೀಯ ಬಹುಮಾನ ವಿಜೇತ ಚಿತ್ರ: ಭುವಿಯ ಸ್ವರ್ಗ"
ಛಾಯಾಗ್ರಾಹಕ: ಎಸ್. ಲೋಕೇಶ್. ಬೆಂಗಳೂರು.

ಮೂರನೇ ಬಹುಮಾನ ವಿಜೇತ ಚಿತ್ರ: " ಶ್ಲೋಕ"
ಛಾಯಾಗ್ರಾಹಕ : ಸುಭಾಸ್ ಜೀರಂಗೆ. ಮುಂಬೈ

ಮೊದಲ ಆರ್ಹತ ಪತ್ರ ಪಡೆದ ಚಿತ್ರ "ಸೆಂಟಿಮೆಂಟಲಿಷ್ಟ್"
ಛಾಯಾಗ್ರಾಹಕ: ಬಿಜನ್ ಕುಮಾರ್ ಮಂಡಲ್. ಕೊಲ್ಕತ್ತ.

ಎರಡನೇ ಅರ್ಹತಾ ಪತ್ರ ಪಡೆದ ಚಿತ್ರ: "ಚಿನ್ನದ ಕೂದಲಿನ ಮಗು"
ಛಾಯಾಗ್ರಾಹಕ: ಕೆ.ಜಿ.ಪದ್ಮನಾಭ. ಬೆಂಗಳೂರು.

ಕಪ್ಪು-ಬಿಳುಪು ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.
ಅರ್ಹತಾ ಪತ್ರ ಪಡೆದ ಚಿತ್ರ: "ಸುಂದರ ಆಡುಗೆ"
ಛಾಯಾಗ್ರಾಹಕ: ಟಿ.ಶ್ರೀನಿವಾಸ ರೆಡ್ಡಿ. ವಿಜಯವಾಡ.

ಎರಡನೇ ಅರ್ಹತಾ ಪತ್ರ ಪಡೆದ ಚಿತ್ರ: "ಮೋನಿಷ"
ಛಾಯಾಗ್ರಾಹಕ: ಕೆ.ಎಸ್.ಶ್ರೀನಿವಾಸ್. ಬೆಂಗಳೂರು.

ಮೂರನೇ ಅರ್ಹತ ಪತ್ರ ಪಡೆದ ಚಿತ್ರ: "ರಾತ್ರಿ ದೃಶ್ಯ".
ಛಾಯಾಗ್ರಾಹಕ: ಸುಬ್ರತಾ ದಾಸ್. ಕೋಚ್ ಬಿಹಾರ್.


ಅತ್ಯುತ್ತಮ ಪೋರ್ಟ್ರೈಟ್ ಬಹುಮಾನ ಪಡೆದ ಚಿತ್ರ: "ಕನಸನ್ನು ಬೆಂಬತ್ತಿ"
ಛಾಯಾಗ್ರಾಹಕ:"ಪಾಲ್ ಅನೂಪ್" ಕೊಲ್ಕತ್ತ.


ದ್ವಿತೀಯ ಬಹುಮಾನ ವಿಜೇತ ಚಿತ್ರ: "ಶನಿವಾರ ರಾತ್ರಿ"
ಛಾಯಾಗ್ರಾಹಕ: :"ಪಾಲ್ ಅನೂಪ್" ಕೊಲ್ಕತ್ತ.


ಮೊದಲ ಬಹುಮಾನ ವಿಜೇತ: "ಕನಸಿನ ಮನೆ"
ಛಾಯಾಗ್ರಾಹಕ: ಶಿವು.ಕೆ. ಬೆಂಗಳೂರು.
ಫೆಬ್ರವರಿ ನಾಲ್ಕರಿಂದ ಏಳರವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುವ ಫೋಟೊಗಳ ಉತ್ಸವದಲ್ಲಿ ಬೇಟಿಯಾಗೋಣ. ಬರುತ್ತಿರಲ್ಲಾ!

\-------------------------\
\---------------------------------------------\
ಚಿತ್ರಸಂತೆಯ ಬಗ್ಗೆ ಒಂದು ವಿಚಾರ

ಈ ಕೆಳಗಿನ ಚಿತ್ರವನ್ನು ನೋಡಿ. ಸಂಜೆ ಸೂರ್ಯಮುಳುಗುವ ಹೊತ್ತಿಗೆ ಎತ್ತಿನ ಗಾಡಿ ಮನೆಕಡೆಗೆ ಬರುತ್ತಿರುವ ದೃಶ್ಯದ ಸುಂದರವಾದ ಕಲಾಕೃತಿ ಗೋಡೆಯನ್ನು ಆಲಂಕರಿಸಿದೆಯಲ್ಲವೇ. ಈ ಸುಂದರ ಪೇಂಟಿಂಗ್ ಮಾಡಿದ್ದು ನನ್ನ ಶ್ರೀಮತಿಯ ದೊಡ್ಡಪ್ಪನ ಮಗನಾದ ವಸಂತ್. ಅವರು ಇರುವುದು ಹಾಸನದಲ್ಲಿ . ಅಲ್ಲಿನ ಒಂದು ಶಾಲೆಯಲ್ಲಿ ಚಿತ್ರಕಲಾ ಉಪದ್ಯಾಯರಾಗಿರುವ ಅವರು ಪ್ರತಿವರ್ಷ ಬೆಂಗಳೂರಿನಲ್ಲಿ ನಡೆಯುವ ಚಿತ್ರಸಂತೆಗೆ ಇಂಥ ಹತ್ತಾರು ಚಿತ್ರಗಳನ್ನು ತರುತ್ತಾರೆ. ನಾನು ಕ್ಲಿಕ್ಕಿಸಿದ ಚಿತ್ರಗಳನ್ನೆಲ್ಲಾ ಪಡೆದುಕೊಂಡು ಅವರು ಮತ್ತು ಅವರ ಶಿಷ್ಯಂದಿರು ಇಂಥ ಸುಂದರ ಪೇಂಟಿಂಗ್ ಮಾಡಿಕೊಂಡು ಚಿತ್ರ ಸಂತೆಗೆ ತರುತ್ತಾರೆ.
ಬಿಡದಿಯಲ್ಲಿರುವ ಈ ಮನೆಗೆ ಕಳೆದ ತಿಂಗಳು ಫೋಟೊ ಕ್ಲಿಕ್ಕಿಸಲು ಹೋದಾಗ ಈ ಚಿತ್ರಕಲಾಕೃತಿಯನ್ನು ನೋಡಿ ಅದನ್ನು ಪೇಂಟ್ ಮಾಡಿರುವುದು ನನ್ನ ಶ್ರೀಮತಿಯ ಅಣ್ಣನೆಂದು, ಹೇಳಿ ಅದರ ಮೂಲ ಚಿತ್ರವನ್ನು ಕೊಟ್ಟಾಗ ಅದನ್ನು ಮತ್ತೊಂದು ಕೋಣೆಯಲ್ಲಿ ಹಾಕಿದ್ದಾರೆ. ಅಲ್ಲಿಗೆ ನಾನೇ ಕ್ಲಿಕ್ಕಿಸಿದ ಫೋಟೊ ಮತ್ತು ಅದನ್ನು ನೋಡಿಕೊಂಡು ಬಿಡಿಸಿದ ಕಲಾಕೃತಿ ಎರಡು ಒಂದೇ ಮನೆಯಲ್ಲಿ ಸೇರಿರುವುದು ಎಂಥ ಕಾಕತಾಳಿಯವಲ್ಲವೇ...
ಆ ಮನೆಯವರು ಈಗಾಗಲೇ ದಿನಾಂಕ ಜನವರಿ ೩೧ರ ಭಾನುವಾರ ನಡೆಯುವ ಚಿತ್ರಸಂತೆಗೆ ಬಂದು ಮತ್ತಷ್ಟು ಛಾಯಾಚಿತ್ರ ಮತ್ತು ಪೇಂಟಿಂಗ್ ಕೊಳ್ಳುವುದಾಗಿ ಹೇಳಿದ್ದಾರೆ.
ಆಂದಹಾಗೆ ನಾಳೆ ಭಾನುವಾರ[ಜನವರಿ೩೧] ಹೇಮಾಶ್ರಿ ಅಣ್ಣ ವಸಂತ್ ಮತ್ತು ಆವರು ಶಿಷ್ಯಂದಿರು ರಚಿಸಿರುವ ಎಲ್ಲಾ ಕಲಾಕೃತಿಗಳನ್ನು ನೋಡಲು ಮತ್ತು ಕೊಂಡುಕೊಳ್ಳಲು ಚಿತ್ರ ಸಂತೆಗೆ ಬನ್ನಿ. ಕಳೆದ ನಾಲ್ಕುವರ್ಷದಿಂದ ಅವರಿಗೆ ಖಾದಿಭಂಡಾರದ ಮುಂದೆಯೇ ಸ್ಥಳ ಸಿಗುತ್ತಿರುವುದರಿಂದ ಖಚಿತವಾಗಿ ಈ ಬಾರಿಯೂ ಅಲ್ಲಿಯೇ ಸ್ಟಾಲ್ ಇಡುತ್ತಾರೆ. ಅಂಥ ದೊಡ್ಡ ಕಲಾಕೃತಿಗಳ ಪಕ್ಕದಲ್ಲಿ ನಾನಿರುತ್ತೇನೆ. ಹಾಗಾದರೆ ನಾಳೆ ಚಿತ್ರ ಸಂತೆಯಲ್ಲಿ ಬ್ಲಾಗ್ ಗೆಳೆಯರೆಲ್ಲಾ ಬೇಟಿಯಾಗುವ!

ಶಿವು.ಕೆ.